Homeಸುದ್ದಿಗಳುರಾಷ್ಟ್ರಕೂಟ ಸಾಹಿತ್ಯಶ್ರೀ ಪ್ರಶಸ್ತಿಗೆ ಕೃತಿಗಳ ಆಹ್ವಾನ

ರಾಷ್ಟ್ರಕೂಟ ಸಾಹಿತ್ಯಶ್ರೀ ಪ್ರಶಸ್ತಿಗೆ ಕೃತಿಗಳ ಆಹ್ವಾನ

Published on

ಬೆಳಗಾವಿ – ಹೊಂಬೆಳಕು ಸಾoಸ್ಕೃತಿಕ ಸಂಘ(ರಿ) ಬೆಳಗಾವಿ ಸಂಸ್ಥೆಯು ತನ್ನ ರಜತ ಮಹೋತ್ಸವದ ನಿಮಿತ್ತ ಪ್ರತಿ ವರ್ಷದಂತೆ 2025 ನೇ ಸಾಲಿನಲ್ಲಿ ಪ್ರಕಟಗೊಂಡ ಕವನ, ಕಥೆ, ಕಾದಂಬರಿ, ಪ್ರಬಂಧ ಮತ್ತು ಮಕ್ಕಳ ಸಾಹಿತ್ಯ ಕೃತಿಗಳಿಗೆ “ರಾಷ್ಟ್ರಕೂಟ ಸಾಹಿತ್ಯಶ್ರೀ ” ಪ್ರಶಸ್ತಿಯನ್ನು ನೀಡಲುದ್ದೇಶಿಸಿದೆ.

ಆಸಕ್ತ ಸಾಹಿತಿಗಳು 2025 ನೇ ಸಾಲಿನಲ್ಲಿ ಪ್ರಥಮ ಆವೃತ್ತಿಯಾಗಿ ಪ್ರಕಟಣೆಗೊಂಡ ಕೃತಿಗಳನ್ನು ತ್ರಿಪ್ರತಿಗಳಲ್ಲಿ ಆರ್. ಬಿ. ಬನಶಂಕರಿ, ಕಾರ್ಯದರ್ಶಿಗಳು, ಹೊಂಬೆಳಕು ಸಾಂಸ್ಕೃತಿಕ ಸಂಘ (ರಿ), # 77, “ಶ್ರೀ ಶಾಕಾಂಬರಿ” ಸಂಕಲ್ಪ ಲೇಔಟ್, ಟೀಚರ್ಸ್ ಕಾಲೋನಿ, ವಿಜಯನಗರ ಬೆಳಗಾವಿ -591108 ಈ ವಿಳಾಸಕ್ಕೆ ದಿನಾಂಕ : 15-05-2026 ರೊಳಗಾಗಿ ಕಳುಹಿಸಿ ಕೊಡಲು ಸಂಘದ ಅಧ್ಯಕ್ಷರಾದ ಸ. ರಾ. ಸುಳಕೂಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಪ್ರೊ. ಶಶಿಕಲಾ ಪಾವಸೆ, ಉಪಾಧ್ಯಕ್ಷರು, ಮೊಬೈಲ್ ಸಂಖ್ಯೆ. 94818 54236, ಆರ್. ಬಿ. ಬನಶಂಕರಿ, ಮೊಬೈಲ್ ಸಂಖ್ಯೆ. 9449479456 ಇವರನ್ನು ಕೋರಲಾಗಿದೆ.

Latest articles

More like this